ಮಹದೇವಪುರ: ಕನ್ನಡ ಬಿಗ್ ಬಾಸ್ ಸೀಸನ್ 10ರ ಫಿನಾಲೆಗೆ ಅಯ್ಕೆಯಾಗಿರುವ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಬೆಂಬಲಿಸಿ ನೂರಾರು ಅಭಿಮಾನಿಗಳು ವರ್ತೂರು ಸೇರಿದಂತೆ ವಿವಿಧೆಡೆ ಬೈಕ್ ರ್ಯಾಲಿ ನಡೆಸಿದರು.ಹಳ್ಳಿಕಾರ್ ಒಡೆಯ ಎಂದೇ ಜನಪ್ರಿಯತೆ ಗಳಿಸಿರುವ ವರ್ತೂರು ಸಂತೋಷ್ ಬಿಗ್ ಬಾಸ್ ಸೀಸನ್ 10ರಲ್ಲಿ ಪೈನಲ್ ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹುಟ್ಟೂರಿನ ವರ್ತೂರಿನಲ್ಲಿ ಸಂಭ್ರಮ ಮನೆ ಮಾಡಿದ್ದು,
ಸಂತೋಷ್ ಅವರ ನೂರಾರು ಅಭಿಮಾನಿಗಳು ಅವರ ಪರವಾಗಿ ವರ್ತೂರು ಮುಖ್ಯರಸ್ತೆ, ಬಳಗೆರೆ,ಸರ್ಜಾಪುರ, ಮಾರತ್ತಹಳ್ಳಿ ರಸ್ತೆ ಸೇರಿದಂತೆ ವಿವಿಧೆಡೆ ಬೈಕ್ ರ್ಯಾಲಿ ನಡೆಸುವ ಮೂಲಕ ಬಿಗ್ ಬಾಸ್ ಫಿನಾಲೆಗೆ ಅಯ್ಕೆಯಾಗಿರುವ ಸ್ಪರ್ಧಿ ಸಂತೋಷ್ ಗೆ ಮತ ನೀಡುವ ಮೂಲಕ ರೈತ ಮಗನ ಗೆಲುವಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.ವರ್ತೂರ್ ಸಂತೋಷ್ ಭಾವಚಿತ್ರ ಹಾಗೂ ಹಳ್ಳಿಕಾರ್ ಒಡೆಯನ ಎತ್ತುಗಳನ್ನು ವರ್ತೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಮನೆ ಮನೆಗೆ ತೆರಳಿ ಮತ ಚಲಾಯಿಸುವಂತೆ ಪ್ರಚಾರ ನಡೆಸಿದರು.
ಇದೇ ಮಾತನಾಡಿದ ಜೈ ಶ್ರೀರಾಮಸೇನೆಯ ಅಧ್ಯಕ್ಷ ಕುಪ್ಪಿ ಮಂಜುನಾಥ್, ವರ್ತೂರು ಸಂತೋಷ್ ಹಳ್ಳಿಕಾರ್ ಎತ್ತುಗಳ ತಳಿಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ, ರೈತರ ಪ್ರತಿನಿಧಿಯಾಗಿ ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಹಿಸಿ ಫಿನಾಲೆಗೆ ತಲುಪಿದ್ದಾರೆ, ಹಳ್ಳಿಕಾರ್ ತಳಿಯ ಜಾನುವಾರು ಸಾಕಾಣಿಕೆಯಿಂದ ಜನಪ್ರಿಯತೆ ಗಳಿಸಿರುವ ಕೃಷಿಕ ವರ್ತೂರು ಸಂತೋಷ್ ಗೆದ್ದು ಬರಬೇಕು, ಅವರಿಗೆ ಮತ ನೀಡುವ ಮೂಲಕ ರೈತರ ಏಳಿಗೆಗಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ವರ್ತೂರು ಸಂತೋಷ್ ತಾಯಿ ಮಂಜುಳಾ ಅವರು ಮಾತನಾಡಿ ಹಳ್ಳಿಕಾರ್ ಒಡೆಯ ಸಂತೋಷ್ ಅವರಿಗೆ ನಾಡಿನ ಜನತೆ ಪೆÇ್ರೀತ್ಸಾಹ ನೀಡುತ್ತಿದ್ದು, ಪೈನಲ್ ನಲ್ಲಿ ಗೆಲುವಿಗೆ ಮತ ಚಲಾಯಿಸುವ ಮೂಲಕ ಗೆಲ್ಲಿಸುವಂತೆ ಕೋರಿದರು.