ಹೊಸಕೋಟೆ: ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ರವರುಗಳ ದಾರ್ಶನಿಕದೊಂದಿಗೆ ಭಾರತೀಯ ತತ್ವದರ್ಶನದಲ್ಲಿ ಸಾಂಪ್ರದಾಯಿಕ ಬದುಕು, ಸರ್ವರಿಗೂ ಸಮಬಾಳು ಸಮಪಾಲು, ಸಮಾನತೆ ನಮ್ಮ ಸಂವಿಧಾನಿಕ ಕೊಡುಗೆಯಾಗಿದೆ ಎಂದು ಜನಪದರು ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಕಾಟಂನಲ್ಲೂರ್ ಪಾಪಣ್ಣ ಹೇಳಿದರು.
ಅವರು ಸಮೀಪದ ಅಭಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ರಂಗಮಂದಿರದಲ್ಲಿ ಆಯೋಜಿಸಿದ್ದ 2023ರ ಶಿವಸಂಚಾರ ಸಾಣೆಹಳ್ಳಿಯ 3 ದಿನಗಳ ನಾಟಕೋತ್ಸವದ ಸಮಾರೋಪದಲ್ಲಿ ಮಾತನಾಡಿದರು.ಮೂರು ದಿನಗಳ ನಾಟಕೋತ್ಸವಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಪ್ರತಿವರ್ಷವೂ ಸಹ ಶಿವಸಂಚಾರ ಸಾಣೆಹಳ್ಳಿಯ ತಂಡ ಇಲ್ಲಿ ಪ್ರದರ್ಶನ ನೀಡಲು ಪ್ರೋತ್ಸಾಹಿಸಲಾಗುತ್ತಿದೆ. ವೇದಿಕೆಯು ನಾಡಿನ ಶ್ರೇಷ್ಠ ರಂಗತಂಡಗಳಿಂದ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ದೌರ್ಜನ್ಯದಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಸಾಮಾಜಿಕ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದಾನಿಗಳ ಸಹಕಾರದೊಂದಿಗೆ ಕಲಾವಿದರ ವಾಸ್ತವ್ಯಕ್ಕೂ ಸಹ ಸುಸಜ್ಜಿತವಾದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಡಾ: ನಟರಾಜ ಬೂದಾಳ್ರ “ಕಲ್ಯಾಣದಬಾಗಿಲು” ನಾಟಕವನ್ನು ಖ್ಯಾತ ನಿರ್ದೇಶಕ ರಾದ ಸಿ. ಬಸವಲಿಂಗಯ್ಯನವ ನಿರ್ದೇಶನದಲ್ಲಿ ಮೂಡಿ ಬಂದಿತು. ಹಿಂದಿನ ದಿನ ಸಾಮರಸ್ಯದ ಸಂದೇಶದ ಜಯಂತ್ ಕಾಯ್ಕಿಣಿಯವರ “ಜೊತೆಗಿರುವವನು ಚಂದಿರ” ನಾಟಕ ವನ್ನು ಹುಲುಗಪ್ಪ ಕಟ್ಟಿಮನಿಯವರ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.
ಕಲಾವಿದರ ಉತ್ತಮಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ದರ ನ್ನಾಗಿಸಿತು.ವೇದಿಕೆ ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ, ಸಿದ್ಧೇಶ್ವರ ನನಸುಮನೆ, ಓ. ಸುರೇಶ. ಚಲಪತಿ, ಮುನಿರಾಜು ಅಗ್ರಹಾರ ಹಾಜರಿದ್ದರು. ನಾಟಕದ ಬಗ್ಗೆ ಹಿರಿಯ ಪ್ರೇಕ್ಷಕರು ವಿಮರ್ಶೆ ಮಾಡಿದರು. ಇದೇ ಸಂದರ್ಭದಲ್ಲಿ ತಂಡದ ಕಲಾವಿದರನ್ನು ಗೌರವಿಸಿ ಸನ್ಮಾನಿಸಲಾಯಿತು.