LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕನ್ನಡ ಸಾಹಿತ್ಯಕ್ಕೆ ಹಿರಿಮೆ ಈ ಸಮ್ಮೇಳನ ಪಟೇಲ್ ನಾರಾಯಣಸ್ವಾಮಿ ಸಾರಥ್ಯದಲ್ಲಿ ಸಂಭ್ರಮ

ಶಿಡ್ಲಘಟ್ಟ: ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಬೆಳೆಸುವ ಮತ್ತು ಉಳಿಸುವ ಕಾಯಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಅನನ್ಯವಾದುದು. ತಾಲೂಕು ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು ಇದಕ್ಕೆ ಪೂರಕವಾಗಿದ್ದು ಹತ್ತನೇ ಸಾಹಿತ್ಯ ಸಮ್ಮೇಳನ ಇಂದು ನಗರದಲ್ಲಿ ಸಂಘಟಕರ ತಿಳಿಗೇಡಿತನದ ನಡುವೆ ನಡೆಯಲಿದೆ.

ಕನ್ನಡ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಪಟೇಲ್ ನಾರಾಯಣಸ್ವಾಮಿ ಈಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ಶ್ರೀ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಾಗಿ ವೃತ್ತಿ ನಿರ್ವಹಣೆ ಮಾಡಿ ನಿವೃತ್ತಿನಂತರವೂ ಸಾಹಿತ್ಯ ಉಳಿಸಿ ಬೆಳೆಸುವ ಕಾಯಕ ಮುಂದುವರಿಸಿದ್ದಾರೆ. ಇವರ ಆಸಕ್ತಿ ಗಮನಿಸಿ ಇವರೆಡೆಗೆ ತಾಲೂಕುಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಅರಸಿ ಬಂತು ಎನ್ನಲಾಗಿದೆ.

ಅಲ್ಪಸಮಯದಲ್ಲಿ ಅತಿ ದೊಡ್ಡ ಜವಾಬ್ದಾರಿಯನ್ನು ನಿರ್ವಹಣೆ ಮಾಡುವ ಹೊಣೆಗಾರಿಕೆ ಇವರ ಮೇಲೆ ಅನಿವಾರ್ಯವಾಗಿ ಬಿದ್ದಿತ್ತು. ಸಾವಿರಾರು ಮಂದಿ ಸದಸ್ಯರಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಯೊಬ್ಬರಿಗೂ ಆಹ್ವಾನ ನೀಡುವ ಸವಾಲು ಇವರನ್ನು ಧೃತಿಗೆಡಿಸಿದ್ದು ಸಹಜ. ಆದರೆ ಕೆಲವು ಮಿತ್ರರ ಸಹಕಾರದ ನಂಬಿಕೆಯ ಮೇಲೆ ಇವರು ಸಾಹಿತ್ಯ ಸಮ್ಮೇಳನ ನಡೆಸುವ ಜವಾಬ್ದಾರಿ ವಹಿಸಿಕೊಂಡು ರಾತ್ರಿ- ಹಗಲು ವಿಶ್ರಾಂತಿ ಇಲ್ಲದೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದಾರೆ. ಸ್ಥಳೀಯ ಶಾಸಕರ ಸಹಕಾರ ಇದ್ದುದ್ದರಿಂದ ನಿರಾಳವಾಗಿ ಇರುವಂತಾಗಿದೆ.

ಇದರ ನಡುವೆ ಸಮ್ಮೇಳನ ಅಧ್ಯಕ್ಷರ ಆಯ್ಕೆಯ ಬಗ್ಗೆ ಕೆಲವರ ಹಿತಾಸಕ್ತಿ ಇದೆ ಎಂಬುದು ನಿಜವಾದರೂ ಪ್ರಚಾರಪ್ರಿಯತೆಗಾಗಿ ನಿವೃತ್ತ ಹಿರಿಯ ಪತ್ರಕರ್ತ ತಮ್ಮ ಸಮುದಾಯದ ವಿದ್ಯಾ ಸಂಸ್ಥೆಯ ಹೊಣೆಗಾರಿಕೆಯ ಜೊತೆಗೆ ತನ್ನ ಜೀವಮಾನದ ಆಸೆ ಈಡೇರಿಸಿಕೊಂಡಂತಾಗಿದೆ. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಇವರಿಗೆ ಅಂತಹ ಗುರುದಕ್ಷಿಣೆ ನೀಡಿದ್ದಾರೆ ಎಂದು ಗುಸು-ಗುಸು ಕೇಳಿ ಬಂದಿದೆ.

ಇದರ ನಡುವೆ ಪತ್ರಕರ್ತರ ಸಂಘದ ಹೆಸರಿನ “ಧ್ವನಿ”ಗೆ ಕಿವಿಗೊಡದ ಹಿರಿಯ ಹಾಗೂ ಮೂಲ ಪತ್ರಕರ್ತರ ಸಂಘದ ಸ್ವಾಭಿಮಾನಿ ಹಿರಿಯ ಪತ್ರಕರ್ತರ ಹೆಸರನ್ನು ಬಳಸಿಕೊಂಡಿರುವುದು ಗಲಿಬಿಲಿ ಉಂಟು ಮಾಡಿದೆ.ಏನೇ ಆದರೂ ಪಟೇಲ್ ನಾರಾಯಣಸ್ವಾಮಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹೊಸ ಹೊಸ ಅನುಭವಗಳನ್ನು ಈ ಸಮ್ಮೇಳನದ ಮೂಲಕ ಪಡೆಯುವಂತಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು