LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕಾರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ ಅವಿರೋಧ ಆಯ್ಕೆ

ಬಂಗಾರಪೇಟೆ: ಕಾರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಂ. ನಾರಾಯಣಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಪ್ರಕ್ರಿಯೆ ಯಲ್ಲಿ ಎಲ್ಲ ಸದಸ್ಯರು ಒಮ್ಮತದಿಂದ ಶ್ರೀನಿವಾಸ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀನಿವಾಸ್ ರವರು ಪಂಚಾಯಿತಿ ಕಛೇರಿಯ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯನ್ನು ತಡೆಹಿಡಿಯಲು ನ್ಯಾಯಾಲಯಕ್ಕೆ " ತಪ್ಪು ಮಾಹಿತಿ ಕೊಟ್ಟು ಒಂದು ತಡೆಯಾಜ್ಞಾಯನ್ನು ಮರುದಿನವೇ ತಡೆಯಾಜ್ಞೆಯನ್ನು 50ಸಾವಿರ ದಿನದ ಮಟ್ಟಿಗೆ ತಂದಿದ್ದರು. ನ್ಯಾಯಾಲಯ ವಜಾಮಾಡಿ ದಂಡವನ್ನು ಸಹ ವಿಧಿಸಿತ್ತು. ಈ ಚುನಾವಣೆಯಲ್ಲಿ ನಮ್ಮ ಗ್ರಾಮ ಪಂಚಾಯಿತಿ ಸದಸ್ಯರುಗಳು ಒಗ್ಗಟ್ಟಾಗಿದ್ದರು ಅದನ್ನು ಒಡೆಯಲು ವಿರೋಧಿಗಳು ಎಷ್ಟೆ ಆಮಿಷವೊಡ್ಡಿ ಕುತಂತ್ರ ರೂಪಿಸಿದರು ನಮ್ಮ ಪಂಚಾಯಿತಿ ಸದಸ್ಯರ ಒಗ್ಗಟ್ಟಿನ ಶಕ್ತಿಯ ಮುಂದೆ ಅವರ ಆಟ ನಡೆಯಲಿಲ್ಲ ಎಲ್ಲಾ ಸದಸ್ಯರು ಸೇರಿ ಒಮ್ಮತದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದರು.

ನಮ್ಮ ಕಾರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರ ಗುರಿ ಒಂದೇ ಅದು ಅಭಿವೃದ್ಧಿ, ಹಾಗಾಗಿ ನನ್ನ ಮೇಲೆ ಸದಸ್ಯರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಮೂಲಕ ಪಂಚಾಯಿತಿಗೆ ಸೇರಿದ ಪ್ರತಿ ಗ್ರಾಮಗಳಲ್ಲಿ ಬಾಕಿ ಉಳಿದಿದರುವ ಕೆಲಸಗಳನ್ನು ಪೂರ್ಣಗೊಳಿಸಿ ಜನತೆಗೆ ಅರ್ಪಿಸುತ್ತೇವೆ.ಪಂಚಾಯಿತಿಯ ಆಮಿಷಗಳಿಗೆ ಬಲವಾಗಿ ಗ್ರಾಮಗಳಲ್ಲಿ ಮಾಡಬೇಕು ಯಾವ ಸದಸ್ಯರು ಬಲಿಯಾಗದೆ ನನಗೆ ನಿಂತರು.ನಮ್ಮ ಅಭಿವೃದ್ಧಿಯನ್ನು ಎಂಬ ಗುರಿಯನ್ನು ಹೊಂದಿದ್ದಾರೆ.

ಅವರೆಲ್ಲರ ಆಸೆಯಂತೆ ನಾನು ಸಹ ಗ್ರಾಮಗಳಲ್ಲಿ 200 ಕೆಲಸಗಳನ್ನು ಉಳಿದಿರುವ ಪೂರ್ಣಗೊಳಿಸಿ ಅಭಿವೃದ್ಧಿ ಪಡಿಸುತ್ತೇನೆ. ಗ್ರಾಮ * ಪಂಚಾಯಿತಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ದಾನಿಗಳು ಭೂಮಿಯನ್ನು ದಾನವಾಗಿ ನೀಡಿದ್ದಾರೆ ಆ ಸ್ಥಳದಲ್ಲಿ ಮುಂದಿನ ನನ್ನ ಅವಧಿಯ ಒಳಗೆ ನೂತನ ಗ್ರಾಮ ಪಂಚಾಯಿತಿ ಕಟ್ಟಡವನ್ನು ನಿರ್ಮಾಣ ಮಾಡಿ ಜನತೆಗೆ ಅರ್ಪಿಸುವ ಕೆಲಸಕ್ಕೆ ಕೈಜೋಡಿಸುತ್ತೇನೆ ಎಂದರು.

ಚುನಾವಣಾ ಅಧಿಕಾ-ರಿಯಾಗಿ ಎ.ಇ.ಇ. ರವಿ ರವರು ಕಾರ್ಯನಿರ್ವಹಿಸಿದರು.ಈ ಸಂದರ್ಭದಲ್ಲಿ ನಾರಾಯಣ. ಚಂದ್ರಕಲಾ ಎಂ.ಎನ್.ಮಂಜುನಾಥ್, ಕಾವ್ಯಎಸ್.ಯಲ್ಲಮ್ಮ,ಸೀತಮ್ಮ,ಅ ಶ್ವಿನಿ,ರಮೇಶ್, ರಾಧಮ್ಮ, ಮಮತ, ಅಬ್ಬಿದುಲ್ಲಾ ಖಾನ್, ನಾಗರತ್ನಮ್ಮ,ಎ *0ಕಟರಾಜಮ್ಮ.ಆನಂದ್.ಗಿರಿಜಮ್ಮ ಮತ್ತು ಪುರಸಭೆ ಸದಸ್ಯ ಷಫಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣು, ಪಂಚಾಯಿತಿ ಸಿಬ್ಬಂದಿ ಮತ್ತು ಪೂಲೀಸರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು