LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ

ಕನಕಪುರ:ರೈತರ ಜೀವನ ಹಸನಾಗುಸಲು ಇರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸುವ ಮೂಲಕ ಸಂಘದ ಮಾಜಿ ಅಧ್ಯಕ್ಷ ಶಂಭುಲಿAಗೇಗೌಡ ಗ್ರಾಮದ ರೈತರಿಗೆ ವಂಚನೆ ಎಸಗಿದ್ದಾರೆ ಎಂದು ಟಿ. ಬೇಕುಪ್ಪೆ ಗ್ರಾಮದ ರೈತರು ಆರೋಪಿಸಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿಯ ಟಿ. ಬೇಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ ಒಂದು ವರ್ಷದಿಂದ ಸಂಘದ ಮಾಜಿ ಅಧ್ಯಕ್ಷರು ತಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆದು ಹಾಲು ಸರಬರಾಜು ಮಾಡುತ್ತಿರುವುದಾಗಿ ತೋರಿಸಿ ಸುಮಾರು 3 ಲಕ್ಷದ 84 ಸಾವಿರ ರೂಪಾಯಿ ಹಣವನ್ನು ತಮ್ಮ ಮಗಳು ಕಾವ್ಯಶ್ರೀ ಹೆಸರಿನಲ್ಲಿರುವ ಯೂನಿಯನ್ ಬ್ಯಾಂಕ್ ನ ಖಾತೆಗೆ ವರ್ಗಾಯಿಸಿರುವುದಾಗಿ ಆರೋಪಿಸಿದ್ದಾರೆ.
ಟಿ. ಬೇಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಂಘದ ಬಳಿ ಮಾತನಾಡಿದ ಗ್ರಾಮಸ್ಥರು ಈ ಅವ್ಯವಹಾರದಲ್ಲಿ ಮಾಜಿ ಅಧ್ಯಕ್ಷರು, ನಿರ್ದೇಶಕರು ಗಳು ಶಾಮೀಲಾಗಿದ್ದು ಈ ಬಗ್ಗೆ ಡೈರಿ ಉಪ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು ಯಾವುದೇ ರೀತಿ ಪ್ರಯೋಜನವಾಗಿಲ್ಲ,ಗ್ರಾಮದ (60) ಅರವತ್ತು ರೈತರಿಂದ ಪ್ರತಿ ನಿತ್ಯ ಬೆಳ್ಳಗೆ ಮತ್ತು ಸಂಜೆ ಸೇರಿ ಸುಮಾರು 1500 ಸಾವಿರ ಲೀಟರ್ ಹಾಲು ಸಂಗ್ರಹ ವಾಗುತ್ತಿದ್ದು ಹಾಲಿನ ಪ್ರಮಾಣ ಅಳತೆ ಮಾಡುವ ಯಂತ್ರ ದಲ್ಲಿ ದೋಷವಿದ್ದು ಹತ್ತು ಲೀಟರ್ ಹಾಲಿಗೆ ಮುನ್ನೂರು ಮಿ.ಲಿ ಕಡಿಮೆ ಅಳತೆ ತೋರಿಸುವುದರಿಂದ ರೈತರಿಗೆ ಬಾರಿ ನಷ್ಟವಾಗುತ್ತಿದೆ, ಈ ಬಗ್ಗೆ ಹಲವು ಸಲ ದೂರು ನೀಡಿದರೂ ಏನು ಪ್ರಯೋಜನವಾಗಿಲ್ಲ ನೂತನ ಆಡಳಿತ ಮಂಡಳಿಅಧಿಕಾರಕ್ಕೆ ಬಂದ ಮೇಲೆ ಈ ಅವ್ಯವಹಾರಗಳು ಬೆಳಕಿಗೆ ಬಂದಿದ್ದು ಡೈರಿ ಕಾರ್ಯದರ್ಶಿ ಶಿವಕುಮಾರ್ ಗೆ ದಾಖಲಾತಿ ನೀಡುವಂತೆ ಅಧ್ಯಕ್ಷರು ಕೇಳಿದರೂ ಸಹ ಯಾವುದೇ ದಾಖಲಾತಿಗಳನ್ನು ನೀಡದಿರುವುದು ಹಲವು ಅನುಮಾನ ಮೂಡುತ್ತಿದೆ, ಅಲ್ಲದೆ ಹಾಲು ಸರಬರಾಜು ಮಾಡದಿದ್ದರೂ ಸಹ ಹಾಲಿನ ಹಣ ಮಾತ್ರ ಕಾವ್ಯಶ್ರೀ ಖಾತೆಗೆ ಸಂದಾಯವಾಗಿ ಬೋನಸ್ ಹಣ ಸಂದಾಯ ವಾಗದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ, ಈ ಅವ್ಯವಹಾರದ ಬಗ್ಗೆ ಕೂಲಂಕಷ ವಾಗಿ ತನಿಖೆಯನ್ನು ಮಾಡಿಸುವಂತೆ ಆಗ್ರಹಿಸಿದರು.
ರೈತರ ಜೀವನಾಡಿಯಾಗಿರುವ ಹಾಲು ಉತ್ಪಾದಕರ ಸಂಘದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ರವರು ಪ್ರತಿಯೊಬ್ಬ ರೈತರ ಅಭ್ಯುದಯಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ಆದಾಯವನ್ನು ಹೆಚ್ಚು
ಮಾಡುವುದರ ಜೊತೆಗೆ ಇಡೀ ದೇಶದಲ್ಲೇ ಒಂದು ಮಾದರಿ ಸಂಸ್ಥೆಯಾಗಿ ಮಾಡಲು ಹೊರಟಿದ್ದು ಆದರೆ ಇಂತಹ ಅವ್ಯವಹಾರ ಬೆಳವಣಿಗೆ ಸಂಸ್ಥೆಗೆ ಕಳಂಕ ತಂದು ರೈತರಿಗೂ ನಷ್ಟ ಉಂಟಾಗಲಿದೆ ಈ ಬಗ್ಗೆ ಡಿ ಕೆ ಸುರೇಶ್ ರವರು ಗಮನ ಹರಿಸಿ ಅವ್ಯವಹಾರದಲ್ಲಿ ಭಾಗಿಯಾಗಿ ರುವ ಮಾಜಿ ಅಧ್ಯಕ್ಷ, ನಿರ್ದೇಶಕರು ಹಾಗೂ ಹಾಲಿನ ಡೈರಿ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಂಡು ನಮ್ಮ ಗ್ರಾಮದ
ಹಾಲು ಉತ್ಪಾದಕರ ಸಂಘ ಉಳಿಸುವುದರ ಜೊತೆಗೆ ರೈತರ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ.
ಗ್ರಾಮದ ರೈತರಾದ ಮಧು, ಶಿವಕುಮಾರ್, ರಾಜಶೇಖರ್, ನವೀನ್, ವರುಣ್, ಶಿವಕುಮಾರ್, ಮಧು ಸೇರಿದಂತೆ ಗ್ರಾಮದ ಹಲವು ರೈತರು ಈ ವೇಳೆ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು