LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

"ಕೆನಾನ್ ಇಂಡಿಯಾದಿAದ `ಗ್ರಾಮ ದತ್ತು ಯೋಜನೆಯಡಿ ಸಾತನೂರು ಗ್ರಾಮ ದತ್ತು"

ಕನಕಪುರ: ಭಾರತದ ಎಲ್ಲ ಪ್ರದೇಶಗಳಲ್ಲೂ ಸುಸ್ಥಿರ ಪ್ರಗತಿ ಯತ್ತ ತನ್ನ ಬದ್ಧತೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕೆನಾನ್ ಇಂಡಿಯಾ ಕನಕಪುರ ತಾಲ್ಲೂಕಿನ ಸಾತನೂರು ಗ್ರಾಮವನ್ನು ದತ್ತು ತೆಗೆದುಕೊಂಡಿದ್ದು ಇದು ಕೆನಾನ್ ನ `ಗ್ರಾಮ ದತ್ತು ಉಪಕ್ರಮದಲ್ಲಿ ಸೇರ್ಪಡೆ ಯಾದ ೧೦ನೇ ಗ್ರಾಮವಾಗಿದೆ ಎಂದು ಕೆನಾನ್ ಸಂಸ್ಥೆಯ ಪ್ರಾಡಕ್ಟ್ ಅಂಡ್ ಕಮ್ಯುನಿಕೇಷನ್ಸ್ ಸೀನಿಯರ್ ಡೈರೆಕ್ಟರ್ ಸುಕುಮಾರನ್ ತಿಳಿಸಿದರು.

ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ಸಂಸ್ಥೆಯ ಈ ಮೈಲಿಗಲ್ಲಿನ ಗುರುತಾಗಿ ಕೆನಾನ್ ದಕ್ಷಿಣ ಪ್ರದೇಶದಲ್ಲಿ ತನ್ನ ಸತತ ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರಗತಿಯತ್ತ ತನ್ನ ಪ್ರಯತ್ನಗಳನ್ನು ನಡೆಸುತ್ತಿದ್ದು ಶೈಕ್ಷಣಿಕ ಮೂಲ ಸೌಕರ್ಯ, ಮಹಿಳಾ ಸಬಲೀಕರಣ, ಪಾರಿಸರಿಕ ಅರಿವು ಮತ್ತು ಸಮುದಾಯಗಳನ್ನು ಸದೃಢಗೊಳಿಸುವ ಧ್ಯೇಯ ವನ್ನು ಹೊಂದಿದೆ,ಈ ಹೊಸ ಗ್ರಾಮ ದತ್ತು ದಕ್ಷಿಣ ಭಾರತ ದಲ್ಲಿ ತನ್ನ ಮುಂದಿನ ಕಾರ್ಯತಂತ್ರೀಯ ವಿಸ್ತರಣೆಯನ್ನು ಯೋಜಿಸಿದ್ದು ತಾಲ್ಲೂಕಿನ ಮಹಾರಾಜಾ ಕಟ್ಟೆ ಮತ್ತು ಅನ್ನದೊಡ್ಡಿಯಂತಹ ಗ್ರಾಮಗಳ ಸಮಗ್ರ ಪರಿವರ್ತನೆ ಸಾಧಿಸಿದೆ ಎಂದರು.

ಸಾತನೂರು ಗ್ರಾಮ ದತ್ತು ಕಾರ್ಯಕ್ರಮದ ಅಡಿಯಲ್ಲಿ ಕೆನಾನ್ ಶಿಕ್ಷಣ,ಕಣ್ಣಿನ ಆರೈಕೆ,ಪರಿಸರ ಮತ್ತು ಸಬಲೀಕ ರಣದ ಸಮುದಾಯ ಅಭಿವೃದ್ಧಿಯ ಪ್ರಮುಖ ಸ್ತಂಭ ಗಳಿಗೆ ಆದ್ಯತೆ ನೀಡುತ್ತಿದ್ದು ಪೋಷಿಸಿದ, ಸ್ವಾವಲಂಬಿ ಮತ್ತು ಸುಸ್ಥಿರ ಸಮುದಾಯವ್ಯವಸ್ಥೆಯನ್ನು ತರುತ್ತದೆ. ಅಲ್ಲದೆ ದುರ್ಬಲ ಸಮುದಾಯಗಳ ಸಬಲೀಕರಣ ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರಗತಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಕೆನಾನ್ ಇಂಡಿಯಾದ ಧ್ಯೇಯಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.

`ಗ್ರಾಮ ದತ್ತು? ಉಪಕ್ರಮದ ಭಾಗವಾಗಿ ೨೦೧೨ ರಲ್ಲಿ ಕೆನಾನ್ ಇಂಡಿಯಾ ಭಾರತದಾದ್ಯಂತ ಒಂದು ನಿರ್ದಿಷ್ಟ ಅವಧಿಯವರೆಗೆ ಗ್ರಾಮಗಳ ಒಟ್ಟಾರೆ ಅಭಿವೃದ್ಧಿ ಕೈಗೊಳ್ಳುತ್ತಿದೆ. ತನ್ನ ಪ್ರಯತ್ನಗಳ ಮೂಲಕ ಕೆನಾನ್ ದೇಶಾದ್ಯಂತ ೩೦೦,೦೦೦ಕ್ಕೂ ಹೆಚ್ಚು ಜನರನ್ನು ತಲುಪಿದ್ದು ಕೆನಾನ್ ನಿಂದ ೧೧,೫೦೦+ ಸ್ವಯಂ ಸೇವಕರ ಸಕ್ರಿಯ ತೊಡಗಿಕೊಳ್ಳುವಿಕೆ ಇದೆ. ಈ ವರ್ಷ ಈ ಉಪಕ್ರಮಗಳು ಮಹಾರಾಷ್ಟçದ ಪರಿವಾಲಿ ಗ್ರಾಮದಲ್ಲಿ ಐದು ವರ್ಷಗಳ ಪರಿವರ್ತನೆಯ ಪ್ರಯಾಣವನ್ನು ಹಾಗೂ ಹರಿಯಾಣದ ನಂದ್ರಾಮ್ ಪುರದಲ್ಲಿ ಮೂರು ವರ್ಷಗಳ ಸಹಯೋಗದ ಮೈಲಿಗಲ್ಲು ಸಂಭ್ರಮಿಸುತ್ತಿದೆ. ಎರಡೂ ಗ್ರಾಮಗಳು ಕೆನಾನ್ ನ ಸ್ಥಿರವಾದ ಮಧ್ಯ ಪ್ರವೇಶಕ್ಕೆ ಸದೃಢವಾದ ಉದಾಹರಣೆಗಳಾಗಿದ್ದು ಅವುಗಳು ಸ್ವಾವಲಂಬಿ ಮತ್ತು ಸುಸ್ಥಿರ ಸಮುದಾಯಗಳಾಗಿ ರೂಪಿಸಲಾಗಿದೆ ಎಂದರು.

ನಾವು ಕರ್ನಾಟಕದ ಸಾತನೂರು ಗ್ರಾಮದೊಂದಿಗೆ ೧೦ನೇ ಗ್ರಾಮ ದತ್ತು ತೆಗೆದುಕೊಂಡಿದ್ದು ಈ ಪರಿವರ್ತನೆ ಯ ಪ್ರಯಾಣವನ್ನು ವಿಸ್ತರಿಸಲು ನಾವು ಹೆಮ್ಮೆ ಪಡುತ್ತೇವೆ. ದಕ್ಷಿಣ ಭಾರತದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ಮಹಾರಾಜಾ ಕಟ್ಟೆ ಮತ್ತು ಆನೆದೊಡ್ಡಿ ಗ್ರಾಮಗಳು ಗುಣಮಟ್ಟದ ಶಿಕ್ಷಣ ಮತ್ತು ಸ್ವಾವಲಂಬನೆಯ ಸ್ಫೂರ್ತಿಯ ಅಭಿವೃದ್ಧಿಗೆ ಜೀವಂತ ಉದಾಹರಣೆಗಳಾಗಿವೆ. ಸಾತನೂರಿನೊಂದಿಗೆ ನಾವು ದೀರ್ಘಾವಧಿ ಸಮುದಾಯ ಸಬಲೀಕರಣಕ್ಕೆ ನಮ್ಮ ಬದ್ಧತೆಯನ್ನು ಪುನರುಚ್ಛರಿಸುತ್ತಿದ್ದೇವೆ ಮತ್ತು ಮುಂದಿನ ತಲೆಮಾರುಗಳಿಗೆ ಪರಿಣಾಮ ಬೀರುವ ಬದಲಾವಣೆಯನ್ನು ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಮತ್ತಿಗೌಡ ಸೇರಿದಂತೆ ಶಿಕ್ಷಕರು,ಕೆನಾನ್ ಸಂಸ್ಥೆ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು