LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Education News

ಟಿಟಿಕೆ ಪ್ರೆಸ್ಟೀಜ್‌ನ, ಕಡಿಮೆ ವಿದ್ಯುತ್ ಬಳಸುವ, ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಗಳು

ನಿಮ್ಮ ಅಡುಗೆ ಮನೆಯಲ್ಲೊಂದು ಮೌನ ಕ್ರಾಂತಿ ಮಾಡಲಿವೆ.ರಾಷ್ಟ್ರೀಯ, ಫೆಬ್ರವರಿ 2026: ಟಿಟಿಕೆ ಪ್ರೆಸ್ಟೀಜ್ ಮನೆ ಮತ್ತು ಅಡುಗೆಮನೆ ಪರಿಹಾರಗಳನ್ನು ಒದಗಿಸುವ ಭಾರತದ ಅತ್ಯಂತ ವಿಶ್ವಾಸಾರ್ಹ ಕಂಪನಿಗಳಲ್ಲಿ ಒಂದು. ಈಗ ಈ ಕಂಪನಿ, ಆಧುನಿಕ ಭಾರತೀಯ ಅಡುಗೆಮನೆಗಳಿಗಾಗಿ ಬಹಳ ಕಡಿಮೆ ವಿದ್ಯುತ್ ಬಳಸಿ ದಕ್ಷವಾಗಿ ಕೆಲಸ ಮಾಡುವುದರ ಜೊತೆಗೆ ಅಡುಗೆ ಮನೆಯ ಅಂದವನ್ನು ಹೆಚ್ಚಿಸುವಂತೆ ವಿನ್ಯಾಸಗೊಳಿಸಲಾದ ತನ್ನ ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಗಳನ್ನು ಬಿಡುಗಡೆ ಮಾಡಿದೆ. ಅತ್ಯಾಧುನಿಕ ಬಿಎಲ್‌ಡಿಸಿ ತಂತ್ರಜ್ಞಾನವಿರುವ ಈ ಹೊಸ ಚಿಮಣಿಗಳು ನಿಮ್ಮ ನಿತ್ಯದ ಅಡುಗೆ ಕೆಲಸವನ್ನು ಸುಗಮಗೊಳಿಸಲಿವೆ. ಇದು ನಿಮ್ಮ ಬಗ್ಗೆ ಪ್ರೆಸ್ಟೀಜ್‌ಗೆ ಇರುವ ನಿರಂತರ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.
ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಗಳಲ್ಲಿ ಟಾರ್ಕ್ ಜೆಟ್ ಸಕ್ಷನ್ ತಂತ್ರಜ್ಞಾನವಿದೆ. ಇದು ಭಾರತೀಯರ ಮನೆಗಳಲ್ಲಿ ಭಾರಿ ಪ್ರಮಾಣಗಳಲ್ಲಿ ಅಡುಗೆ ಸಿದ್ಧಗೊಳಿಸುವಾಗಲೂ ಸಹ ಹೊಗೆ, ಜಿಡ್ಡು ಮತ್ತು ಇತರೆ ವಾಸನೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತವೆ. ಈ ಚಿಮಣಿಗಳು 1400 m³/ಗಂಟೆವರೆಗಿನ ಪ್ರಬಲ ಹೀರುವ ಸಾಮರ್ಥ್ಯವನ್ನು ಹೊಂದಿವೆ. ಹೆಚ್ಚಿನ ಸಾಮರ್ಥ್ಯದ ಬಿಎಲ್‌ಡಿಸಿ ಮೋಟಾರ್‌ನಿಂದ ನಡೆಯುವ ಈ ಚಿಮಣಿಗಳು ಶಾಂತವಾಗಿ ಆದರೆ ಹೆಚ್ಚು ಕೆಲಸ ಮಾಡುತ್ತವೆ. ಗಮನಾರ್ಹವಾಗಿ ಕಡಿಮೆ ವಿದ್ಯುತ್ತನ್ನು ಬಳಸುತ್ತವೆ. ಅಡುಗೆಮನೆ ಹೆಚ್ಚು ಆರಾಮದಾಯಕವಾಗಿ ಮತ್ತು ಶಬ್ದ-ಮುಕ್ತವಾಗಿರುತ್ತದೆ.
ಈ ಚಿಮಣಿಗಳು ಟರ್ಬೊ ಮೋಡ್ ಸೇರಿದಂತೆ 10 ವೇಗಗಳಲ್ಲಿ ಕೆಲಸ ಮಾಡುತ್ತವೆ. ಹೊಗೆ ಹೆಚ್ಚಿದ್ದಾಗ, ಚಿಮಣಿ 1600 ಆರ್‌ಪಿಎಂ ವರೆಗಿನ ವೇಗದಲ್ಲಿ ಕೆಲಸ ಮಾಡುತ್ತದೆ. ನಿಮ್ಮ ಇಂಗಿತದ ಪ್ರಕಾರ ಕೆಲಸ ಮಾಡುವಂತೆ ವಿನ್ಯಾಸಗೊಂಡಿರುವ ಈ ಚಿಮಣಿಗಳನ್ನು ಸನ್ನೆ ಮತ್ತು ಸ್ಪರ್ಶಗಳೊಂದಿಗೆ ನಿಯಂತ್ರಿಸಬಹುದು. ರೋಮಾಂಚಕ ಬಣ್ಣಗಳಲ್ಲಿ ಬರುವ ಈ ಉಪಕರಣವನ್ನು ಸಲೀಸಾಗಿ ನಿರ್ವಹಿಸಬಹುದು.
ಇದು ಬಳಸಲು ಬಹಳ ಸುಲಭ ಹಾಗೂ ನಿರ್ವಹಣೆಯೂ ಸಲೀಸು. ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಗಳಲ್ಲಿ ಹೀಟ್ ಆಟೊ-ಕ್ಲೀನ್ ತಂತ್ರಜ್ಞಾನವಿದೆ ಜೊತೆಗೆ, ಫಿಲ್ಟರ್-ಲೆಸ್. ಯಾವುದೇ ಸಮಸ್ಯೆ ಇಲ್ಲದೆ ನಿರ್ವಹಿಸಬಹುದು ಮತ್ತು ಕಾರ್ಯಕ್ಷಮತೆಯೂ ಸ್ಥಿರವಾಗಿರುತ್ತದೆ. ಇನ್ನೂ ಚೆನ್ನಾಗಿರುವುದು ಬೇಕೆಂದರೆ ಅಲ್ಟ್ರಾ-ಸ್ಲಿಮ್ ಬಾಡಿಯ ಚಿಮಣಿಗಳನ್ನು ಕೊಳ್ಳಬಹುದು. ಇವುಗಳಲ್ಲಿ ಹೈ-ಕೆಪ್ಯಾಸಿಟಿ ಆಯಿಲ್ ಕಲೆಕ್ಟರ್, ಎಲ್‌ಇಡಿ ಲ್ಯಾಂಪ್‌ಗಳು ಇರುತ್ತವೆ. ಹಾಗಾಗಿ ಕ್ಲೀನಿಂಗ್ ಸುಲಭ, ಅಡುಗೆಮನೆಯಲ್ಲಿ ಒಳ್ಳೆಯ ಬೆಳಕಿರುತ್ತದೆ. ಬಾಳಿಕೆ ಬರುವ ಕಪ್ಪು ಪುಡಿ-ಲೇಪಿಸಿದ ಫಿನಿಶ್‌ನಿಂದ ಚಿಮಣಿ ಇನ್ನಷ್ಟು ಆಕರ್ಷಕ. ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಯನ್ನು ತಜ್ಞರು ಬಂದು ಉಚಿತವಾಗಿ ಇನ್‌ಸ್ಟಾಲ್ ಮಾಡಿಕೊಡುತ್ತಾರೆ. ರೂ.2249 ಮೌಲ್ಯದ ಪ್ರೀಮಿಯಂ ಇನ್ಸ÷್ಟಲೇಶನ್ ಕಿಟ್ ಅನ್ನು ಸಹ ಉಚಿತವಾಗಿ ನೀಡಲಾಗುತ್ತದೆ ಮತ್ತು ಬಿಎಲ್‌ಡಿಸಿ ಮೋಟಾರ್‌ಗೆ ಜೀವಿತಾವಧಿ ವಾರಂಟಿ ಇರುತ್ತದೆ. ಇದರಿಂದ ಗ್ರಾಹಕರು ದೀರ್ಘ ಕಾಲ ಯಾವುದೇ ಚಿಂತೆ ಇಲ್ಲದೆ ಈ ಚಿಮಣಿಗಳನ್ನು ಬಳಸಬಹುದು. ವಿವಿಧ ಅಡುಗೆ ಪ್ರಮಾಣಗಳಿಗೆ ಸರಿಹೊಂದುವAತೆ ಈ ಶ್ರೇಣಿ ಎರಡು ಗಾತ್ರಗಳಲ್ಲಿ ಲಭ್ಯವಿದೆ: ಸಣ್ಣ ಮತ್ತು ಮಧ್ಯಮ ಗಾತ್ರದ ಅಡುಗೆಮನೆಗಳಿಗೆ ಸೂಕ್ತವಾದ ಪ್ರೀಮಿಯಾ ಬಿಎಲ್‌ಡಿಸಿ 60 ಸೆಂ.ಮೀ ಚಿಮಣಿ, ಇದರ ಎಂಆರ್‌ಪಿ ರೂ.30,900 ಆದರೆ ಗ್ರಾಹಕರಿಗೆ ರೂ.16,995 ಬೆಲೆಯಲ್ಲಿ ನೀಡಬಹುದು. ದೊಡ್ಡ ಅಡುಗೆಮನೆಗಳಿಗಾಗಿ ವಿಶಾಲ ವ್ಯಾಪ್ತಿಯ ಮತ್ತು ಹೆಚ್ಚಿನ ಸಾಮರ್ಥ್ಯದ ಪ್ರೀಮಿಯಾ ಬಿಎಲ್‌ಡಿಸಿ 90 ಸೆಂ.ಮೀ ಚಿಮಣಿ. ಇದರ ಎಂಆರ್‌ಪಿ ರೂ.32,720 ಆದರೆ ಗ್ರಾಹಕರಿಗೆ ರೂ.16,995 ಬೆಲೆಯಲ್ಲಿ ನೀಡಬಹುದು. ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಗಳು: ಟಿಟಿಕೆ ಪ್ರೆಸ್ಟೀಜ್‌ನ ತಂತ್ರಜ್ಞಾನ-ಚಾಲಿತ, ಇಂಧನ-ಸಮರ್ಥ ಅಡುಗೆಮನೆ ಪರಿಹಾರಗಳ ಪೋಟ್ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಿದೆ. ಸಾಮರ್ಥ್ಯ, ಅನುಕೂಲ ಮತ್ತು ಸಮಕಾಲೀನ ವಿನ್ಯಾಸ ಎಲ್ಲವೂ ಇವುಗಳಲ್ಲಿ ಮೇಳೈಸಿವೆ. ಭಾರತೀಯರಿಗೆ ಟಿಟಿಕೆ ಬ್ರ್ಯಾಂಡ್ ನಶ್ರೇಷ್ಠ ಪರಂಪರೆಯ ಮೇಲಿರುವ ನಂಬಿಕೆ ಮತ್ತು ವಿಶ್ವಾಸವನ್ನು ಈ ಹೊಸ ಶ್ರೇಣಿ ಮತ್ತಷ್ಟು ಬಲಪಡಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂದರ್ಶಿಸಿ: www..ttkpresitage.com
ಟಿಟಿಕೆ ಪ್ರೆಸ್ಟೀಜ್ ಕುರಿತು (https://shop.ttkpresitage.com/) ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್, ಟಿಟಿಕೆ ಗ್ರೂಪ್‌ನ ಭಾಗವಾಗಿದೆ. ಕಳೆದ ಆರು ದಶಕಗಳಿಂದ ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್, ದೇಶದ ಗೃಹಿಣಿಯರ ಅಗತ್ಯಗಳನ್ನು ಪೂರೈಸುತ್ತಾ ಭಾರತದ ಅತಿದೊಡ್ಡ ಅಡುಗೆಮನೆ ಅ ಸಂಸ್ಥೆಯಾಗಿ ಹೊರಹೊಮ್ಮಿದೆ. ಪ್ರತಿಯೊಂದು ಪ್ರೆಸ್ಟೀಜ್ ಬ್ರ್ಯಾಂಡ್ ಉತ್ಪನ್ನವನ್ನು, ಸುರಕ್ಷತೆ, ಆವಿಷ್ಕಾರ, ಬಾಳಿಕೆ ಮತ್ತು ವಿಶ್ವಸನೀಯತೆಯ ಆಧಾರಸ್ತಂಭಗಳ ಮೇಲೆ ನಿರ್ಮಾಣ ಮಾಡಲಾಗಿರುವುದರಿಂದ, ಕೋಟ್ಯಂತರ ಮನೆಗಳಲ್ಲಿ ಬ್ರ್ಯಾಂಡ್ ಮೊದಲ ಆಯ್ಕೆಯ ಬ್ರ್ಯಾಂಡ್ ಆಗಿದೆ. ಅದು ಯುಕೆದ ಹಾರ್ವುಡ್ ಹೋಂವೇರ್ಸ್ ಖರೀದಿಸಿತ್ತು ಮತ್ತು ಆಗಸ್ಟ್ 2017ರಲ್ಲಿ ಭಾರತದಲ್ಲಿ ಜಡ್ಜ್ ಬ್ರ್ಯಾಂಡ್ ಪರಿಚಯಿಸಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು