ಕೋಲಾರ: ಮರ್ಯಾದಾ ಪುರು ಷೋತ್ತಮ ಶ್ರೀರಾಮನ ಸ್ಮರಣೆ, ಪಾನಕ, ಮಜ್ಜಿಗೆ,ಕೋಸಂಬರಿ ವಿತರಣೆಯ ಮೂಲಕ ಶ್ರೀರಾಮನವಮಿಯನ್ನು ಜಿಲ್ಲಾದ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.ಕೋಲಾರ ಜಿಲ್ಲೆಗೂ ಶ್ರೀರಾಮ, ಹನುಮನಿಗೂ ವಿಶೇಷ ನಂಟು ಜಿಲ್ಲೆಯಲ್ಲಿ ಹನುಮನ ದೇಗುಲವಿಲ್ಲದ ಊರೇ ಇಲ್ಲ, ಪ್ರತಿ ರಸ್ತೆಯಲ್ಲೂ ಹನು ಮನ ದೇಗುಲಗಳು ರಾರಾಜಿಸುವ ಮೂಲಕ ಪೂಜೆ ನಿರಂತರವಾಗಿ ನಡೆದಿದೆ.
ಶ್ರೀರಾಮನವಮಿ ಅಂಗವಾಗಿ ಎಲ್ಲಾ ದೇವಾಲ ಯಗಳು, ರಸ್ತೆ ಬದಿಯಲ್ಲಿ ವಿವಿಧ ಸಂಘಟನೆಗಳು, ವ್ಯಾಪಾರಿಗಳು ಬಿಸಿಲ ತಾಪಕ್ಕೆ ದಣಿದು ಸಾಗುವವರಿಗೆ ಪಾನಕ,ಮಜ್ಜಿಗೆ,ಕೋಸಂಬರಿ ವಿತರಿಸುವ ಮೂಲಕ ಶ್ರೀರಾಮನಮಿಯನ್ನು ಹೆಚ್ಚಿನ ಸಡಗರದಿಂದ ಆಚರಿಸಿದರು.ಎಪಿಎಂಸಿ, ನಗರದ ಹೊರವಲಯದ ತೋಟ ಗಾರಿಕಾ ಮಹಾವಿದ್ಯಾಲಯದ ಬಳಿ, ಕೀಲುಕೋಟೆ, ದೊಡ್ಡಪೇಟೆ, ರಾಮದೇವರಗುಡಿಬೀದಿ, ಕಿಲಾರಿಪೇಟೆ ವೇಣುಗೋಪಾಲಸ್ವಾಮಿ ದೇವಾಲಯ, ನಗರದ ಪಿಸಿ ಬಡಾವಣೆಯ ಶ್ರೀರಾಮ ಕಾಂಡಿಮೆಂಟ್ಸ್ನ ಸ್ನೇಹಿತರು ಸೇರಿದಂತೆ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.
ಬ್ರಾಹ್ಮಣರ ಬೀದಿಯ ರಾಮದೇವರ ಗುಡಿ: ಶ್ರೀರಾಮನವಮಿ ಅಂಗವಾಗಿ ನಗರದ ಬಸ್ನಿಲ್ದಾಣದ ಸಮೀಪವಿರುವ ಶ್ರೀರಾಮದೇವರ ಗುಡಿಯಲ್ಲಿ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.ಇಡೀ ದೇವಾಲಯವನ್ನು ಹೂಗಳಿಂದ ಅಲಂ ಕರಿಸಲಾಗಿದ್ದು, ಇಂದು ಬೆಳಗ್ಗೆ ಪಾನಕ,ಮಜ್ಜಿಗೆ, ಕೋಸಂಬರಿ ವಿತರಣೆ ಭರದಿಂದ ನಡೆಯಿತು.
ಕೋಲಾರ ಹೊರವಲಯದ ತೋಟ ಗಾರಿಕಾ ಮಹಾವಿದ್ಯಾಲಯದ ಸಮೀಪ ನಿರ್ಮಾಣಗೊಂಡಿರುವ ಬೃಹತ್ ಶ್ರೀರಾಮ ಚಂದ್ರ ಮೂರ್ತಿಗೆ ಹಾಗೂ ಆಂಜನೇಯಸ್ವಾಮಿಗೆ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜೆ ಏರ್ಪಡಿಸಿದ್ದು, ಪಾನಕ,ಹೆಸರುಬೇಳೆ,ಮಜ್ಜಿಗೆ ವಿನಿಯೋಗ ಕಾರ್ಯಕ್ರಮಕ್ಕೆ ನಡೆಯಿತು.
ನಗರದ ದೊಡ್ಡಪೇಟೆಯ ಶ್ರೀರಾಮ ದೇವಸ್ಥಾನ, ವೆಂಕಟರಮಣಸ್ವಾಮಿ, ಬ್ರಾಹ್ಮಣರ ಬೀದಿಯ ದೊಡ್ಡ ಆಂಜನೇಯಸ್ವಾಮಿ, ಕುರುಬರಪೇಟೆಯ ಪಂಚಮುಖಿ ಗಣಪತಿ, ನಗರದೇವತೆ ಕೋಲಾರಮ್ಮ ದೇವಾಲಯ, ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಹಲವು ಭಕ್ತರು ಉಪವಾಸ ವ್ರತ ಆಚರಿಸಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪಾನಕ, ಕೋಸಂಬರಿ, ಮಜ್ಜಿಗೆ ಸೇವಿಸಿದರು. ಭಜನಾ ಮಂಡಳಿಗಳು ರಾತ್ರಿ ಶ್ರೀರಾಮ ಭಜನೆ, ಹನುಮಾನ್ ಕೀರ್ತನೆ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇವಸ್ಥಾನಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.