ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮಿಚಾಂಗ್ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿನ ಬಾಪಟ್ಲಾದಲ್ಲಿ ಶೀಘ್ರವೇ ಅಪ್ಪಳಿಸುವ ಸಾಧ್ಯತೆ ಇದೆ. ಇದರಿಂದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮಳೆ ಆರ್ಭಟದ ಅಪಾಯ ಇನ್ನಷ್ಟು ಹೆಚ್ಚಿದೆ. ಚೆನ್ನೈನಲ್ಲಿ ಮಳೆ ಸಂಬಂಧಿ ಅನಾಹುತಗಳಿಂದ ಈವರೆಗೂ ಎಂಟು ಮಂದಿ ಜೀವ ಕಳೆದುಕೊಂಡಿರುವುದು ವರದಿಯಾಗಿದೆ.
ಚಂಡಮಾರುತದ ವೇಗ ಗಂಟೆಗೆ 90?100 ಕಿ.ಮೀ ಇರಲಿದ್ದು, ಕ್ರಮೇಣ 110 ಕಿ.ಮೀ.ಗೆ ಏರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಇಂದು ಕೂಡಾ ಆಂಧ್ರದ ವಿವಿಧೆಡೆ ಭಾರಿ ಮಳೆಯಾಗುತ್ತಿದೆ `ಮುಂದಿನ 24 ಗಂಟೆಗಳ ಅವಧಿಯಲ್ಲಿ 200 ಮಿ.ಮೀವರೆಗೂ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ` ಎಂದು ರಾಯಿಟರ್ಸ್ ವರದಿ ಮಾಡಿದೆ.
`ಮಿಚಾಂಗ್’ ಚಂಡಮಾರುತದ ಕೇಂದ್ರಸ್ಥಾನ ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿತ್ತು. ಇದರ ಪರಿಣಾಮ ತಮಿಳುನಾಡಿನ ಉತ್ತರ ಹಾಗೂ ಆಂಧ್ರಪ್ರದೇಶ ದಕ್ಷಿಣ ಹೆಚ್ಚಿರಲಿದೆ. ಇಂದು ಆಂಧ್ರದ ನೆಲ್ಲೂರು, ಮಚಿಲಿಪಟ್ಟಣಂ ಕಡೆ ಸಾಗಲಿದೆ. ಮಂಗಳವಾರ ಇದರ ತೀವ್ರತೆ ಹೆಚ್ಚಿರಲಿದೆ ಎಂದು ಇಲಾಖೆ ವಿವರಿಸಿದೆ.
ಆಂಧ್ರದ ತಿರುಪತಿ, ನೆಲ್ಲೂರು, ಪ್ರಕಾಶಂ, ಬಾಪಟ್ಪ, ಕೃಷ್ಣಾ,ಪಶ್ಚಿಮ ಗೋದಾವರಿ, ಕೋನಸೀಮ, ಕಾಕಿನಾಡ ಜಿಲ್ಲೆಗಳಲ್ಲಿ ಪರಿಣಾಮ ಹೆಚ್ಚಿರಲಿದೆ. ಮುಂಜಾಗ್ರತೆಯಾಗಿ ಎನ್ಡಿಆರ್ ಎಫ್, ಎಸ್ಡಿಆರ್ಎಫ್ ತಂಡ ನಿಯೋಜಿಸಿದೆ.