ಬೆಂಗಳೂರು: ವಿಧಾನಸಭೆ ಕಲಾಪವನ್ನು ಈ ತಿಂಗಳ 28ರ ಬುಧವಾರಕ್ಕೆ ಮುಂದೂಡಲಾಗಿದೆ.ಇಂದು ಬೆಳಿಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು…ನಿನ್ನೆ ನಿಧನರಾದ ಶಾಸಕ ರಾಜವೆಂಕಟಪ್ಪ ನಾಯ್ಕ್ ಅವರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸದನದ ಬಹುತೇಕ ಸದಸ್ಯರು ಮಾತನಾಡಿ ಶಾಸಕ ರಾಜ ವೆಂಕಟಪ್ಪ ನಾಯ್ಕ್ ಅವರ ಸೇವಾ ಕಾರ್ಯವನ್ನು ಹಾಗೂ ಅವರ ವ್ಯಕ್ತಿತ್ವವನ್ನು ಸ್ಮರಿಸಿ ಮಾತನಾಡಿದರು.
ತದನಂತರ ಸದನ ಸದಸ್ಯರು ಒಂದು ನಿಮಿಷಗಳ ಕಾಲ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಿದ ನಂತರ ಸಭಾಧ್ಯಕ್ಷರು ಸಂತಾಪ ಸೂಚಕ ನಿರ್ಣಯವನ್ನು ಅವರ ಕುಟುಂಬಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿ ಸದನಕಲಾಪವನ್ನು ಬುಧವಾರ ಬೆಳಿಗ್ಗೆ 9.15ಕ್ಕೆ ಮುಂದೂಡಿದರು.