ಬೆಂಗಳೂರು: ಫುಡ್ ಡೆಲಿವರಿ ಬಾಯ್ ಓರ್ವನನ್ನು ಬೆದರಿಸಿ ಆತನ ಬಳಿಯಿದ್ದ ನಗದು, ಮೊಬೈಲ್ ಫೋನ್ ದೋಚಿ ಪರಾರಿಯಾಗಿರುವ ಘಟನೆ ಜೀವನ ಹಳ್ಳಿ ಕೆಳ ಸೇತುವೆ ಬಳಿ ನಡೆದಿದೆ.
ಜೀವನಹಳ್ಳಿ ಬಳಿ ಶಾರುದ್ದೀನ್ ಎಂಬುವವರು ನಿನ್ನೆ ಮಧ್ಯ ರಾತ್ರಿ ಫುಡ್ ಡೆಲಿವರಿ ಮಾಡಲು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಎರಡು ದ್ವಿಚಕ್ರ ವಾಹನದಲ್ಲಿ 4 ಜನ ಅಪರಿಚಿತರು ಆತನನ್ನು ಅಡ್ಡಹಾಕಿ ನಿಲ್ಲಿಸಿ,
ಚಾಕುವಿನಿಂದ ಹೆದರಿಸಿ ಆತನ ಬಳಿಯಿದ್ದ 8000 ನಗದು ಹಾಗೂ ಒಂದು ಮೊಬೈಲ್ ಫೋನನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ.ಈ ಸಂಬಂಧ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.