ರಾಮನಗರ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ರಾಮನಗರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿದ್ಯುತ್ ಅವಘಡ, ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಬುಧವಾರ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಿದರು.
ರಾಮನಗರ ವಿಭಾಗ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜು ಮಾತನಾಡಿ, ವಿದ್ಯುತ್ ಸುರಕ್ಷತೆ ಬಗ್ಗೆ ಸರಿಯಾದ ಅರಿವಿಲ್ಲದೆ ಸಾರ್ವಜನಿಕವಾಗಿ ಅನೇಕ ವಿದ್ಯುತ್ ಅಫಘಾತ, ಅವಘಡಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರಲ್ಲಿ ಸರಿಯಾದ ಮಾಹಿತಿ ಕೊರತೆ ಇರುವುದು.
ಆ ಕಾರಣದಿಂದ ಜನರಿಗೆ ಸರಿಯಾದ ಮಾಹಿತಿ ವಿದ್ಯುತ್ ಅಫಘಾತ ತಡೆಗಟ್ಟುವಿಕೆ, ಅಫಘಾತ ಆದ ಸಂಧರ್ಭದಲ್ಲಿ ಅನುಸರಣೆ ಮಾಡಬೇಕಿರುವ ಕ್ರಮ ವಹಿಸಬೇಕಾದ ಜಾಗೃತಿ ಸಾರ್ವಜನಿಕರು ಪ್ರತೀ ಕ್ಷಣ ಇರಬೇಕಾದ ಎಚ್ಚರ ಮುಂತಾದ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಾಥಾದ ಮೂಲಕ ಸಾರ್ವಜನಿಕರು, ಗ್ರಾಹಕರಲ್ಲಿಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ, ಚರ್ಚಾಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯುತ್ ಅಪಘಾತಗಳು, ಅವಘಡಗಳ ಬಗ್ಗೆ ತಿಳಿಹೇಳುವ ಕೆಲಸ ಬೆಸ್ಕಾಂ ಮಾಡಲಾಗುತ್ತಿದೆ. ಅಲ್ಲದೇ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳು ನಡೆಸುವ ಗ್ರಾಮಸಭೆಗಳ ಮೂಲಕ ಸಾರ್ವಜನಿಕರಿಗೆಜಾಗೃತಿ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.
ಚಾಮುಂಡೇಶ್ವರಿ ದೇವಾಲ ಯದ ಆವರಣದಿಂದ ಹೊರಟ ಜಾಥಎಂ.ಜಿ.ರಸ್ತೆ, ಹಳೇ ಬಸ್ ನಿಲ್ದಾಣ, ಮುಖ್ಯರಸ್ತೆಗಳಲ್ಲಿ ಸಂಚರಿಸಿತು. ಧ್ವನಿವರ್ಧಕದಲ್ಲಿ ತಿಳುವಳಿಕೆ ಮತ್ತು ಮಾಹಿತಿ ಪತ್ರ ಹಿಡಿದುಜನಪದ ಡೊಳ್ಳು ಮುಖಾಂತರ ಮೆರವಣಿಗೆಯಲ್ಲಿ ಸಾಗಿದರು.
ಜಾಥಾದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಾಮನಗರ ವಿಭಾಗ ಕೃಷ್ಣಮೂರ್ತಿ, ಚನ್ನಪಟ್ಟಣ ಚಿದಾನಂದ್, ಬೇವೂರು ಪುಟ್ಟಸ್ವಾಮಿ, ಚಂದನ, ಸಹಾಯಕ ಅಭಿಯಂತರರಾದ ಪ್ರಭಾಕರ್, ಹರ್ಷ, ಪ್ರಸಾದ್, ಕೃಷ್ಣಪ್ರಸಾದ್, ಕಿರಿಯಅಭಿಯಂತರ ಶೀಲಾ, ಚಂದ್ರಶೇಖರ್, ದಿಲೀಪ್, ಸಂದೇಶ್, ಪ್ರಕಾಶ್ ಮುಂತಾದವರಿದ್ದರು.