LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ದಲಿತ ವಿರೋಧ ನೀತಿಯನ್ನು ಖಂಡಿಸಿ ಪ್ರತಿಭಟನೆ: ಚನ್ನಕೇಶವ

ಮಾಗಡಿ: ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರ ದಲಿತ ವಿರೋಧ ನೀತಿಯನ್ನು ಖಂಡಿಸಿ ನವೆಂಬರ್ 18 ರಂದು ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸ್ವಾಭಿಮಾನಿ ಸೇವಾಸಮಿತಿ ಸಂಸ್ಥಾಪಕ ರಾಜ್ಯಾದ್ಯಕ್ಷ ಗುಡೇಮಾರನಹಳ್ಳಿ ಸಿ.ಚನ್ನಕೇಶವ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಅವರು ತಾಲ್ಲೂಕಿನ ಸೋಲೂರು ಹೋಬಳಿ ಗುಡೇಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ 131/ಪ,1 ರಲ್ಲಿ 20 ಗುಂಟೆ ಜಮೀನು ಚನ್ನಿಗಪ್ಪ ಬಿನ್ ಚನ್ನಯ್ಯ ಅವರಿಗೆ 1994:95 ರಲ್ಲಿ ದರಖಾಸ್ತು ಮೂಲಕ ಮಂಜೂರಾತಿಯಾಗಿದೆ.

ನಮಗೆ ಮಂಜೂರಾಗಿದ್ದ ಜಮೀನಿನಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ.ರಾಮಯ್ಯ ಎಂಬುವವರು ನಮ್ಮ ಜಮೀನಿನಲ್ಲಿ ಎರಡು ಕೋಳಿ ಶೆಡ್ ನಿರ್ಮಿಸಿಕೊಂಡಿದ್ದು ಉಪ ವಿಭಾಗಾಧಿಕಾರಿಗಳ ಆದೇಶದಂತೆ ನಮಗೆ ಹಸ್ತಾಂತರಿಸುವಂತೆ ತಹಶೀಲ್ದಾರ್ ಸುರೇಂದ್ರಮೂರ್ತಿ ಅವರಿಗೆ ಕ್ಷೇತ್ರದ ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಸೂಚಿಸಿದ್ದರು.

ಆದರೆ ತಹಶೀಲ್ದಾರ್ ಅವರು ನಾನಾ ರೀತಿಯ ರೀತಿಯ ಸಬೂಬು ನೀಡಿ,ನಮಗೆ ಮಂಜೂರಾಗಿರುವ ಜಮೀನಿಗೆ ಮೂರು ಭಾರಿ ಸ್ಕೆಚ್ ನಕ್ಷೆ ಮಾಡಿಸಿ ಒಂದೊಂದು ಭಾರಿ ಒಂದೊಂದು ರೀತಿಯಲ್ಲಿ ಚಕ್ಕುಬಂದಿ ಬದಲಾವಣೆ ಮಾಡಿ ದಲಿತರಾದ ನಾವುಗಳು ಅನುಭವದಲ್ಲಿರುವ ಜಮೀನಿನಲ್ಲಿ ನಮ್ಮ ಜಮೀನು ಇರುವುದಾಗಿ ನಕ್ಷೆ ಚಕ್ಕುಬಂದಿ ತಯಾರಿಸಿ ದಲಿತರೊಂದಿಗೆ ದಲಿತರೇ ದಲಿತರೇ ಹೊಡೆದಾಡುವ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ ಎಂದು ಹರಿಹಾಯ್ದರು.

ನಮ್ಮ ತಂದೆಯವರಾದ ಚನ್ನಿಗಯ್ಯ ಬಿನ್ ಚನ್ನಯ್ಯ ಅವರಿಗೆ ಸರಕಾರದಿಂದ ಮಂಜೂರಾತಿಯಾಗಿರುವ ಸಾಗುವಳಿ ಜಮೀನು ನಮಗೆ ಪಿತ್ರಾರ್ಜಿತವಾಗಿ ಬಂದಿದ್ದು ಸರಕಾರದ ಆದೇಶವನ್ನು ತಾಲ್ಲೂಕು ಆಡಳಿತ ಧಿಕ್ಕರಿಸುವ ಕೆಲಸವನ್ನು ಮಾಡುತ್ತಿದೆ.ಶಾಸಕ ಹೆಚ್.ಸಿ.ಬಾಲಕೃಷ್ಣ ಅವರ ಸೂಚನೆಗೂ ಬೆಲೆ ನೀಡದ ತಹಶೀಲ್ದಾರ್ ಅವರ ವಿರುದ್ದವಾಗಿ ನವೆಂಬರ್ 18 ರಂದು ಬೆಳಗ್ಗೆ 10 ಗಂಟೆಗೆ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸುತಿದ್ದು ನಮಗೆ ನ್ಯಾಯ ಸಿಗದಿದ್ದರೆ ಮಾಗಡಿಯಿಂದ ಕಾಲ್ನಡಿಗೆ ಅರೆಬೆತ್ತಲೆ ಮೆರವಣಿಗೆ ಮೂಲಕ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರ ಮನೆ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಚನ್ನಕೇಶವ ಎಚ್ವರಿಕೆ ನೀಡಿದರು.

ರಾಜ್ಯ ಹಾಪ್ ಕಾಮ್ಸ್ ಮಾಜಿ ನಿರ್ದೇಶಕ ರಾಮನಹಳ್ಳಿ ಮಂಜೇಶ್, ತಾಪಂ ಮಾಜಿ ಅದ್ಯಕ್ಷ ನಾಗರಾಜು, ದಲಿತ ಮುಖಂಡರಾದ ಶಿವಶಂಕರ್, ಚನ್ನಯ್ಯ, ಮಾಡಬಾಳ್ ಆನಂದ್, ಬಿಬಿಜೆ ಗೋಪಾಲ್, ನರಸಿಂಹಮೂರ್ತಿ, ಜೀವಿಕ ಗಂಗಹನುಮಯ್ಯ, ತೊರೆರಾಮನಹಳ್ಳಿ ನರಸಿಂಹಮೂರ್ತಿ, ರಾಮಣ್ಣ,ಉಮೇಶ್ ಸೇರಿದಂತೆ ಮತ್ತಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು