ಬೆಂಗಳೂರು: ಸಂಜೆ ವೇಳೆಗೆ ಮಳೆ ಬರಲಿದೆ ಎಂಬ ಆತಂಕದ ನಡುವೆ ಬೆಳಗಿನಿಂದಲೇ ಜನರು ಎರಡನೇ ಹಂತದ ಮತದಾನಕ್ಕೆ ಮತಗಟ್ಟೆಯತ್ತ ಹೆಜ್ಜೆಹಾಕುತ್ತಿದ್ದಾರೆ.ಬೆಳ್ಳಂಬೆಳ್ಳಗ್ಗೆಯೇ ರಾಜ್ಯದಲ್ಲಿ ಎರಡನೇ ಹಂತದ ಮತದಾನಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಮತದಾನರು 6.30ರಿಂದಲೇ ಮತಗಟ್ಟೆಗಳ ಮುಂದೆ ಸಾಲಾಗಿ ನಿಂತಿದ್ದು ಕಂಡುಬಂತು.
ಮಧ್ಯಾಹ್ನ ಬಿರು ಬಿಸಿಲು ಸಂಜೆ ವೇಳೆಗೆ ಗಾಳಿ ಮಳೆ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಜನರು ತಾವಾಗಿಯೇ ಮತದಾನ ಮಾಡಲು ಲಘುಬಗೆಯಿಂದ ಮತಗಟ್ಟೆಳತ್ತ ಧಾವಿಸಿ ಮತ ಚಲಾಯಿಸುತ್ತಿದ್ದುದು ಕಂಡುಬಂತು.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಬೆಳಗ್ಗೆ 11 ಗಂಟೆಯ ವೇಳೆಗೆ ಶೇ. 24.48% ಮತದಾನ ನಡೆದಿದೆ.ಎಲ್ಲಾ 14 ಕ್ಷೇತ್ರಗಳಲ್ಲಿ 20% ಹೆಚ್ಚು ಮತದಾನ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಉತ್ತರ ಕನ್ನಡದಲ್ಲಿ 27.65% ಮತದಾನ ನಡೆದರೆ ಶಿವಮೊಗ್ಗದಲ್ಲಿ 27.22% ಮತದಾನ ದಾಖಲಾಗಿದೆ. ರಾಯಚೂರು 22.05%, ಬೀದರ್ನಲ್ಲಿ 22.33% ಮತದಾನ ನಡೆದಿದೆ.
2019ರ ಚುನಾವಣೆಯಲ್ಲಿ ಈ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕಾರಣ ಉತ್ತರ ಕರ್ನಾಟಕದ ಈ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರಾ ಪೈಪೋಟಿ ನಡೆದಿದೆ.