ಬೆಂಗಳೂರು: ಕರ್ನಾಟಕದ ದೇವಾಲಯಗಳು ಇನ್ನು ಮುಂದೆ ಪ್ರವಾಸಿಗರ ಹೊಸ ತಾಣವಾಗಲಿವೆ. ಸರ್ಕಾರದ ಧಾರ್ಮಿಕ ಪ್ರವಾಸೋದ್ಯಮ ಸುತ್ತೋಲೆ ಹೊರಡಿಸಿದ್ದು ಭಕ್ತಾದಿಗಳಿಗೆ ಹೆಚ್ಚು ಅನುಕೂಲಗಳನ್ನು ಮತ್ತಷ್ಟು ಸುಧಾರಿಸಲು ಹಾಗೂ ಆರ್ಥಿಕ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ.
ಕರ್ನಾಟಕ ಸರ್ಕಾರ ಧಾರ್ಮಿಕ ಪ್ರವಾಸೋದ್ಯ ಮ ಅಭಿವೃದ್ಧಿಗೆ ಸಂಬAಧಿಸಿದAತೆ ಹೊಸ ಸುತ್ತೋಲೆ ಹೊರಡಿಸಿದೆ. ರಾಜ್ಯದ ದೇವಾಲಯಗಳನ್ನು ಜಿಲ್ಲಾವಾರು ಹಾಗೂ ಅಂತರ ಜಿಲ್ಲಾವಾರು ಪ್ರವಾಸಿ ಸರ್ಕೂ್ಯಟ್ಗಳಾಗಿ ರೂಪಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ದೇವಾಲಯಗಳಿಗೆ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸುವುದು, ಉತ್ತಮ ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಸಾಮಾನ್ಯ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸೂಚಿಸಲಾಗಿದೆ.
ಭಕ್ತಾದಿಗಳು ತಂಗಲು ಉತ್ತಮ ಕೊಠಡಿಗಳ ವ್ಯವಸ್ಥೆ ಮಾಡುವುದು, ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಏಜೆನ್ಸಿ ಮುಖಾಂತರ ಶುಲ್ಕ ಪಡೆದು ಸರಿಯಾಗಿ ನಿರ್ವಹಿಸುವುದು, ಪ್ರವರ್ಗ `ಎ’ ಮತ್ತು ‘ಬಿ’ ದೇವಾಲಯಗಳಲ್ಲಿ ಲಭ್ಯವಿರುವ ಭೂಮಿಯ ವಿವರಗಳನ್ನು ಸಂಗ್ರಹಿಸುವುದು ಹಾಗೂ ದೇವಾಲಯಗಳ ಸಮೀಪ ಇರುವ ಸರ್ಕಾರಿ ಜಮೀನುಗಳನ್ನು ದೇವಾಲಯಗಳ ಹೆಸರಿಗೆ ಕಾಯ್ದಿರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ದೇವಾಲಯಗಳ ಆಸ್ತಿಗಳ ಉPS ಸ್ಥಳ ವಿವರಗಳನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಜಾಲತಾಣದಲ್ಲಿ ಅಪ್ಲೋಡ್ ಮಾಡುವಂತೆ ಸೂಚಿಸಲಾಗಿದೆ.
ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಭೂಮಿಯ ವಿವರಗಳನ್ನು ಕಳುಹಿಸಿ, ಆದ ಮೂಲಕ ಕಾರ್ಯ ಸಾಧ್ಯತಾ ವರದಿ ಹಾಗೂ ಮಾಸ್ಟರ್ ಪ್ಲಾನ್ ತಯಾರಿಸಲು ಸೂಚಿಸಲಾಗಿದೆ. ದೇವಾಲಯಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದು, ಛತ್ರ, ಅತಿಥಿಗೃಹಗಳು ಹಾಗೂ ಇತರೆ ಮೂಲ ಸೌಕರ್ಯಗಳನ್ನು ದಾನಿಗಳ ಮೂಲಕ ನಿರ್ಮಾಣ ಮಾಡಲು ಉತ್ತೇಜನ ನೀಡುವುದು, ಯೋಜನೆಗಳ ಕುರಿತು ವ್ಯಾಪಕ ಪ್ರಚಾರ ನೀಡುವುದು ಹಾಗೂ ದೇವಾಲಯಗಳಲ್ಲಿ ನಡೆಯುವ ಪ್ರಮುಖ ಉತ್ಸವಗಳ ವಿವರಗಳನ್ನು ಕ್ಯಾಲೆಂಡರ್ನಲ್ಲಿ ದಾಖಲಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಮೇಲ್ಕಂಡ ಎಲ್ಲಾ ಸೂಚನೆಗಳನ್ನು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕೆಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.ಕರ್ನಾಟಕ ಸರ್ಕಾರ ಜುಲೈ 2026ರಲ್ಲಿ ಹೊರಡಿಸಿದ ಧಾರ್ಮಿಕ ಪ್ರವಾಸೋದ್ಯಮ ಸುತ್ತೋಲೆ ರಾಜ್ಯದ ದೇವಾಲಯಗಳನ್ನು ಪ್ರವಾಸಿ ಸರ್ಕೂ್ಯಟ್ಗಳಾಗಿ ರೂಪಿಸಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಉತ್ತೇಜನಕ್ಕೆ ದಾರಿಯನ್ನಿಟ್ಟಿದೆ. ಈ ಸುತ್ತೋಲೆಯ ಪ್ರಮುಖ ಅಂಶಗಳಲ್ಲಿ ದೇವಾಲಯಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವುದು, ಉತ್ತಮ ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಅಅಖಿಗಿ ಅಳವಡಿಸುವುದು ಸೇರಿವೆ. ಭಕ್ತಾದಿಗಳ ಅನುಕೂಲಕ್ಕಾಗಿ ತಂಗಲು ಕೊಠಡಿಗಳ ವ್ಯವಸ್ಥೆ, ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಏಜೆನ್ಸಿ ಮುಖಾಂತರ ಶುಲ್ಕ ಪಡೆದು ನಿರ್ವಹಿಸುವುದು, ಪ್ರವರ್ಗ `ಎ’ ಮತ್ತು `ಬಿ’ ದೇವಾಲಯಗಳ ಭೂಮಿಯ ವಿವರ ಸಂಗ್ರಹಿಸುವುದು, ಸರ್ಕಾರಿ ಜಮೀನುಗಳನ್ನು ದೇವಾಲಯ ಹೆಸರಿಗೆ ಕಾಯ್ದಿರಿಸುವುದು ಹಾಗೂ ಲೊಕೇಶನ್ಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡುವುದನ್ನು ಸೂಚಿಸಲಾಗಿದೆ.ಯೋಜನಾ ವರದಿ ಸಿದ್ಧಪಡಿಸಲು ಆದ ಮೂಲಕ ಕಾರ್ಯ ಸಾಧ್ಯತಾ ವರದಿ, ಮಾಸ್ಟರ್ ಪ್ಲಾನ್ ಹಾಗೂ ವಿಸ್ತೃತ ಯೋಜನಾ ವರದಿ ಉತ್ತೇಜನ ನೀಡಲಾಗುತ್ತದೆ. ಯೋಜನೆಗಳ ಕುರಿತು ವ್ಯಾಪಕ ಪ್ರಚಾರ ನೀಡುವುದು ಹಾಗೂ ದೇವಾಲಯಗಳಲ್ಲಿ ನಡೆಯುವ ಪ್ರಮುಖ ಉತ್ಸವಗಳ ವಿವರಗಳನ್ನು ಕ್ಯಾಲೆಂಡರ್ನಲ್ಲಿ ದಾಖಲಿಸುವುದೂ ಈ ಸುತ್ತೋಲೆಯ ಭಾಗವಾಗಿದೆ.ರಾಜ್ಯದ ದೃಷ್ಟಿಕೋನದಲ್ಲಿ ಹಂಪಿ, ಮೈಸೂರು ಮತ್ತು ಲಕ್ಕುಂಡಿ ಸ್ಥಳಗಳನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ. ಈ ಯೋಜನೆಗೆ ರೂ.800 ಕೋಟಿ ನೆರವು ಎರಡು ಹಂತಗಳಲ್ಲಿ ದೊರೆಯಲಿದೆ `ಮೊದಲ ಹಂತದಲ್ಲಿ ರೂ.500 ಕೋಟಿ, ಎರಡನೇ ಹಂತದಲ್ಲಿ 300 ಕೋಟಿ. ಯೋಜನೆಗಳಲ್ಲಿ ವಿಶ್ವಮಟ್ಟದ ಮೂಲಸೌಕರ್ಯ, ಸುಧಾರಿತ ಸಂಪರ್ಕ, ಪ್ರವಾಸಿಗರ ಅನುಭವ, ಹೇರಿಟೇಜ್ ಸಂರಕ್ಷಣೆ ಹಾಗೂ ಖಾಸಗಿ ಹೂಡಿಕೆಗಳನ್ನು ಒಳಗೊಂಡಿದೆ. ಹಂಪಿ ಉತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಉತ್ಸವವಾಗಿ ರೂಪಿಸುವ ಯೋಜನೆ ಇದೆ.ಈ ಸುತ್ತೋಲೆ ರಾಜ್ಯದ ಧಾರ್ಮಿಕ ಪ್ರವಾಸೋದ್ಯಮವನ್ನು ಸಂಘಟಿತ, ಯೋಜಿತ ಮತ್ತು ಹೂಡಿಕೆ ಆಕರ್ಷಕ ಕ್ಷೇತ್ರವನ್ನಾಗಿ ರೂಪಿಸುವ ಪ್ರಯತ್ನವಾಗಿದೆ. ಮೂಲಸೌಕರ್ಯ ಸುಧಾರಣೆ ಮೂಲಕ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ, ಹೇರಿಟೇಜ್ ಸಂರಕ್ಷಣೆ ಮತ್ತು ಪ್ರವಾಸೋದ್ಯಮದ ಮೂಲಕ ಆರ್ಥಿಕ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ. ಸರ್ಕಾರಿ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಹೂಡಿಕೆ ಆಕರ್ಷಿಸುವುದು, ದಾನಿಗಳ ಮೂಲಕ ಮೂಲಸೌಕರ್ಯ ನಿರ್ಮಾಣಕ್ಕೆ ಉತ್ತೇಜನ ನೀಡುವುದು ಹಾಗೂ ಉತ್ಸವಗಳನ್ನು ಪ್ರವಾಸೋದ್ಯಮದ ಆಕರ್ಷಣೆಯಾಗಿ ಬಳಸುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿವೆ.ಸಾಂಸ್ಕೃತಿಕ ಪರಂಪರೆ, ಭಕ್ತಿಯ ಭಾವನೆ ಮತ್ತು ಪ್ರವಾಸೋದ್ಯಮದ ಬೆಳವಣಿಗೆ ಈ ಮೂರು ಅಂಶಗಳನ್ನು ಒಟ್ಟುಗೂಡಿಸುವ ಮೂಲಕ ಕರ್ನಾಟಕ ಸರ್ಕಾರದ ಧಾರ್ಮಿಕ ಪ್ರವಾಸೋದ್ಯಮ ಯೋಜನೆ ರಾಜ್ಯದ ಭವಿಷ್ಯವನ್ನು ಹೊಸ ಹಾದಿಯಲ್ಲಿ ಮುನ್ನಡೆಸಲಿದೆ.
ಕರ್ನಾಟಕ ಸರ್ಕಾರದ ಧಾರ್ಮಿಕ ಪ್ರವಾಸೋದ್ಯಮ ಸುತ್ತೋಲೆ ದೇವಾಲಯಗಳನ್ನು ಪ್ರವಾಸಿ ಸರ್ಕೂ್ಯಟ್ಗಳಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆ



