ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಪ್ರಾರಂಭ ವಾಗಿರುವ ಕನ್ನಡ ಪರ ಆಂದೋಲನ ಗ್ರಾಮೀಣ ಪ್ರದೇಶಗಳಿಗೂ ಹಬ್ಬುತ್ತಿದೆ. ಅಂಗಡಿ ಮುಗ್ಗಟ್ಟು ಕಚೇರಿ ವಾಣಿಜ್ಯ ಮಳಿಗೆಗಳ ನಾಮಪಲಕಗಳಲ್ಲಿ ಶೇಖಡ 65 ರಷ್ಟು ಕನ್ನಡ ಬಳಕೆ ಇರಬೇಕು ಸಾದ್ಯವಾದ್ರೆ 70% ಕನ್ನಡವನ್ನು ಬಳಸುವಂತೆ ಎಲ್ಲರಿಗೂ ಸೂಚನೆ ನೀಡಬೆಕೆಂದು ಒತ್ತಾಯಿಸಿ ಕರವೇ ಯುವಸೇನೆ ಪದಾದಿಕಾರಿಗಳು ಡಿ.ಸಿ,ಎಸ್ಪಿ ಮತ್ತು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಇತ್ತಿಚೆಗೆ ಬೆಂಗಳೂರಿನಲ್ಲಿ ಕನ್ನಡ ಪರ ಬಾಷೆ ಬಳಕೆ ಬರವಣಿಗೆ ವಿಚಾರವಾಗಿ ಪ್ರಾರಂಭವಾಗಿರುವ ಚಳುವಳಿ ಗ್ರಾಮೀಣ ಪ್ರದೇಶಗಳಿಗೂ ಹಬ್ಬಿತ್ತಿದೆ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿಯೂ ಹೊರ ರಾಜ್ಯದ ವ್ಯಾಪಾರಿಗಳು ಕೇವಲ ಆಂಗ್ಲ ಮತ್ತು ಪ್ರಾದೇಶಿಕ ಭಾಷೆಯಲ್ಲೆ ನಾಮಫಲಕಗಳು ಬಳಸುತ್ತಿದ್ದಾರೆ ಕೆಲವು ಖಾಸಗಿ ಶಾಲೆಗಳ ಮೇಲೆಯೂ ಕೇವಲ ಇಂಗ್ಲೀಷ್ ಬಳಸಿದ ಬೋರ್ಡುಗಳಿವೆ ಅವುಗಳನ್ನ ತೆಗೆಸಿ ಸರ್ಕಾರದ ನಿಯಮ ಪ್ರಕಾರ ಶೇಖಡ 65 ರಷ್ಟು ಕನ್ನಡ ಬಳಸಿದ ನಾಮಪಲಕಗಳನ್ನ ಅಳವಡಿಸುವಂತೆ ಆದೇಶ ಹೋರಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಒತ್ತಾಯಿಸಿ ಡಿ.ಸಿ, ಎಸ್ಪಿ, ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿ ಕರವೇ ಯುವಸೇನೆ ರಾಜ್ಯ ಉಪಾಧ್ಯಕ್ಷ ತಿಪ್ಪೇನಹಳ್ಳಿ ನಾರಾಯಣಸ್ವಾಮಿ ನಮ್ಮ ಮನವಿ ಸ್ವೀಕರಿಸಿದ ಜಿಲ್ಲಾದಿಕಾರಿ,ಪೊಲೀಸ್ ರಕ್ಷಣಾದಿಕಾರಿ ಮತ್ತು ನಗರಸಭೆ ಆಯುಕ್ತರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಕನ್ನಡ ಪರ ಹೋರಾಟ
ಗಾರ ಟಿ.ಎ.ನಾರಾಯಣಗೌಡರನ್ನ ಬಂದಿಸಿರುವ ಸರ್ಕಾರ ಕೂಡಲೆ ಅವರನ್ನ ಬಿಡುಗಡೆ ಮಾಡಬೇಕು.
ಇಲ್ಲದಿದ್ರೆ ಎಲ್ಲ ಕನ್ನಡ ಪರ ಸಂಘಟನೆಗಳು ಒಂದಾಗಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಒತ್ತಾಯಿಸಿದರು. ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಮಾಲ್ ಗಳಲ್ಲಿ, ಚಿತ್ರಮಂದಿರ, ಕೈಗಾರಿಕೆ ಪ್ರದೇಶ, ಶಾಲೆ ಕಾಲೇಜುಗಳು, ವಾಣಿಜ್ಯ ಕಟ್ಟಡಗಳು, ಖಾಸಗಿ ಆಸ್ಪತ್ರೆಗಳು, ಮತ್ತು ಸಾರ್ವಜನಿಕ ಓಡಾಡುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಶೇಕಡ.60 % ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸುವಂತೆ ತಿಳಿಸಿದರು.
ಜಿಲ್ಲಾಧ್ಯಕ್ಷ ರಾಮೇಗೌಡ ಮಾತನಾಡಿ, ನಗರ ಸಭೆಯ ಕಸದ ಆಟೋಗಳಲ್ಲಿ ಕಡ್ಡಾಯವಾಗಿ ಕನ್ನಡಭಾಷೆಯ ಹಾಡುಗಳನ್ನು ಹಾಗೂ ಕನ್ನಡ ಭಾಷೆಯ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಕ್ತ ಕ್ರಮ ವಹಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಪಿ.ನಾರಾಯಣಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಬಾಲು, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಯುವ ಮುಖಂಡ ರವಿರಾಜ್, ಬಾಲಕೃಷ್ಣ, ಗುರುದೇವ್ ಮತ್ತು ಇತರರು ಇದ್ದರು.