ಹೊಸಕೋಟೆ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಹೊಸಕೋಟೆ ವಿಭಾಗದ ಎಲ್ಲಾ ಉಪವಿಭಾಗಗಳ ಪವರ್ಮ್ಯಾನ್ಗಳೊಂದಿಗೆ “ನನ್ನ ಸುರಕ್ಷತೆ ನನ್ನ ಜವಾಬ್ದಾರಿ” ಎಂಬ ವಿದ್ಯುತ್ ಸುರಕ್ಷತಾ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಪವರ್ಮ್ಯಾನ್ಗಳಿಗೆ ವಿದ್ಯುತ್ ಕಾರ್ಯಗಳ್ನು ನಿರ್ವಹಿಸುವಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಾಗಾರದಲ್ಲಿ ಬೆಂಗಳೂರು ಗ್ರಾಮೀಣ ವೃತ್ತದ ಅಧೀಕ್ಷಕ ಇಂಜಿನಿಯರ್ (ವಿದ್ಯುತ್) ಪಾಲನೇತ್ರ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಪದಾಧಿಕಾರಿಗಳು, ಹೊಸಕೋಟೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್). ಗುಣಮಟ್ಟ ಮತ್ತು ಸುರಕ್ಷತೆ ಶಾಖೆಯ ಅಧಿಕಾರಿಗಳು, ಉಪವಿಭಾಗದ ಎಲ್ಲಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳು, ಎಲ್ಲಾ ಶಾಖಾಧಿಕಾರಿಗಳು, ನೌಕರರು ಹಾಜರಿದ್ದರು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಗುಣಮಟ್ಟ ಮತ್ತು ಸುರಕ್ಷತೆ ಹುಸೈನಿ ಹಾಗೂ ಅಪರ ವಿದ್ಯುತ್ ಪರಿವೀಕ್ಷಕರಾದ ಶೃತಿ ನೌಕರರಿಗೆ ವಿದ್ಯುತ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಪ್ರಾತ್ಯಕ್ಷಿಕೆ ನೀಡಿದರು.