ಆನೇಕಲ್: ಪಟ್ಟಣದ ಪಂಪ್ ಹೌಸ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿವೃತ್ತ ಮುಖ್ಯ ಶಿಕ್ಷಕರಾದ ದಿವಂಗತ ಆರ್ ಕೃಷ್ಣಪ್ಪನವರ ಜ್ಞಾಪಕಾರ್ಥ ರಾಷ್ಟ್ರ ನಾಯಕರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳನ್ನು ಕೊಡುಗೆಯಾಗಿ ಸಮಾಜಸೇವಕ ನಂದಕುಮಾರ್ ಅವರು ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಡಾ. ಜಿ.ಮುನಿರಾಜ್ ಅವರು ಮಾತನಾಡಿ, ಶಾಲೆಗಳಿಗೆ ಇಂತಹ ಮಹಾನ್ ವ್ಯಕ್ತಿಗಳ ಫೋಟೋಗಳು ಅವಶ್ಯಕತೆ ಇದ್ದು ಇಂತಹ ಕೊಡುಗೆ ನೀಡಿದ ನಂದಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಗಾರರ ರಾಷ್ಟ್ರ ನಾಯಕರ ಚಿಂತಕರ ಸಮಾಜ ಸುಧಾರಕರ ವಿಚಾರಗಳನ್ನು ತಿಳಿದುಕೊಂಡು ತಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕು, ವಿದ್ಯಾರ್ಥಿಗಳು ಅಂತಹ ವ್ಯಕ್ತಿಗಳ ಆದರ್ಶ ಶಿಸ್ತನ್ನು ರೂಡಿಸಿಕೊಂಡು, ಸತತವಾದ ಪರಿಶ್ರಮದಿಂದ ಸಾಧನೆ ಮಾಡಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಸಮಾಜ ಸೇವಕರಾದ ನಂದ ಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ,ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ಶಿಕ್ಷಕರಾದ ವೇದ, ಪೋಷಕರಾದ ಬಾಬು ಮುಂತಾದವರು ಹಾಜರಿದ್ದರು.