ಬೇಲೂರು: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗುವ ಸನ್ನಿವೇಶದ ಸಂದರ್ಭದಲ್ಲಿ ಇಲ್ಲಿನ ಅಧಿಕಾರಿಗಳು ರಾಜಕೀಯ ಒತ್ತಡದಿಂದ ಯಗಚಿ ಜಲಾಶಯದಿಂದ ನದಿಗೆ ನೀರು ಹರಿಸಿದ್ದಾ ನಿಜಕ್ಕೂ ಶೋಚನೀಯವಾಗಿದೆ. ತಕ್ಷಣವೇ ನೀರನ್ನು ನಿಲ್ಲಿಸಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಬೇಲೂರು ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕಳೆದ ಬಾರಿ ವಾಡಿಕೆ ಮಳೆ ತೀವ್ರ ಹಿನ್ನಡೆಯಾದ ಕಾರಣದಿಂದ ಮುಂಗಾರು ಮತ್ತು ಹಿಂಗಾರು ಇಲ್ಲದೆ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದೆ. ಕಳೆದ ಬಾರಿ. ಆದೃಷ್ಟ ಎಂಬಂತೆ ಯಗಚಿ ಜಲಾಶಯ ಅಲ್ಪ ಸ್ವಲ್ಪ ಚಿಕ್ಕಮಗಳೂರು ಮತ್ತು ಮೂಡಿಗೆರೆ ಸುತ್ತಮುತ್ತಿನ ಮಳೆಯಿಂದ ಅಣೆಕಟ್ಟು ಭರ್ತಿಯಾಗಿತ್ತು.
ಆದರೆ ಅಧಿಕಾರಿಗಳು ಯಾವುದೇ ದೂರದೃಷ್ಟಿ ಇಲ್ಲದೆಹೇಮಾವತಿ ಜಲಾಶಯಕ್ಕೆ ನೀರು ಹರಿಸಿದ ಪರಿಣಾಮ ಜಲಾಶಯದಲ್ಲಿ ಸದ್ಯ 112 ಟಿಎಂಸಿ ನೀರು ಮಾತ್ರ ಉಳಿದಿದೆ. ಇದೇ ನೀರಿನಲ್ಲಿ ಚಿಕ್ಕಮಗಳೂರು ನಗರ. ಬೇಲೂರು ಪಟ್ಟಣ, ಅರಸೀಕೆರೆ ತಾಲೂಕಿಗೆ ಕುಡಿಯುವ ನೀರು ನೀಡಬೇಕಿದೆ. ಈಗಾಗಲೇ ಹವಾಮಾನ ಇಲಾಖೆ ಮೇ ಮತ್ತು ಜೂನ್ ತನಕ ಅಂತಹ ಮಳೆಯ ಖಾತ್ರಿ ನೀಡಿಲ್ಲ ಇಂತಹ ಸಂದರ್ಭದಲ್ಲಿ ಯಗಚಿ ನೀರಾವರಿ ನಿಗಮದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಬಲಿಯಾಗಿ ಕಳೆದ ಮೂರು ದಿನದಿಂದ ಯಗಚಿ ಜಲಾಶಯದಿಂದ 30 ಕ್ಯೂಸೆಕ್ ನೀರು ಹರಿಸಿದ್ದು ಖಂಡನೀಯ, ಸಂಘಟನೆಗಳು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಸಬೂಬು ಉತ್ತರ ನೀಡುತ್ತಾರೆ ಎಂದು ಅಧಿಕಾರಗಳ ವಿರುದ್ಧ ಕಿಡಿ ಕಾರಿದರು.
ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿ, ಪ್ರವಾಸಿ ತಾಣ, ವಿಶ್ವ ಪಾರಂಪರಿಕ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೇಲೂರು ಮೇಲೆ ನಿರಂತರ ಅನ್ಯಾಯ ಮತ್ತು ಮಲತಾಯಿ ಧೋರಣೆ ನಡೆಯುತ್ತಿದೆ. ಇದಕ್ಕೆ ಕಾರಣ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ, ನಮ್ಮ ತಾಲ್ಲೂಕಿನ ಜನತೆ ಈಗಾಗಲೇ ಕುಡಿಯುವ ನೀರಿಗಾಗಿ ಬೇಲೂರು ಯಗಚಿ ಜಲಾಶಯದಿಂದ ನದಿಗೆ ನೀರನ್ನು ಹರಿಸಲಾಗುತ್ತಿದೆ.
ಅಲೆಯುವ ಪರಿಸ್ಥಿತಿ ಉಂಟಾಗಿ ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಇಂತಹ ವೇಳೆಯಲ್ಲಿ ಯಗಚಿ ನೀರಾವರಿ ನಿಗಮದ ಅಧಿಕಾರಿಗಳು ಯಾವ ಮಾನದಂಡದಲ್ಲಿ ನದಿಗೆ ಹರಿಸಿದ ಹಿಂದಿನ ಅಂಶವನ್ನು ತಿಳಿಸಬೇಕು. ಈಗಾಗಲೇ ಜಲಾಶಯದಲ್ಲಿರುವ ಕೇವಲ ಒಂದು ಟಿಎಂಸಿ ನೀರು ಇಂತಹ ಬಿಸಿಲಿನಲ್ಲಿ ನೀರು ಖಾಲಿಯಾಗುತ್ತದೆ. ಈಗಾಗಲೇ ಯಗಚಿ ಆಣ್ಣೆಕಟ್ಟೆಯಿಂದ ನದಿಗೆ ನೀರು ಹರಿಸಬಾರದು ಎಂದು ನಾವುಗಳು ತಿಳಿಸಿದರೂ ಕೂಡ ಅಧಿಕಾರಿಗಳು ತಮ್ಮ ಉಡಾಪೆ ವರ್ತನೆಯಿಂದ ನೀರು ಹರಿಸಿದ್ದಾರೆ.
ತಕ್ಷಣವೇ ನೀರು ನಿಲ್ಲಿಸಬೇಕು ಇಲ್ಲವಾದರೆ ಸೋಮವಾರ ದಿನ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತದೆ. ಕೇವಲ ಸಂಘಟನೆಯವರು ಪ್ರಶ್ನೆ ಮಾಡಿದರೆ ಸಾಲದು ಸ್ಥಳೀಯ ಶಾಸಕರು ಮತ್ತು ಪುರಸಭಾ ಸದಸ್ಯರು ಈ ಬಗ್ಗೆ ಗಮನ ನೀಡಬೇಕು ಎಂದು ಕರವೇ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಹೇಳಿದರು.
ನೀರಿನ ಅಭಾವ ಸೃಷ್ಟಿಗೆ ಅಧಿಕಾರಿಗಳೇ ಹೊಣೆಗಾರಿಕೆ ಹೊರಬೇಕಿದೆ. ಕರವೇ ನಾಡು, ನುಡಿ, ಜಲಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಮುಂದಿನ ದಿನದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.